Friday, December 23, 2016

ತಿಮ್ಮಪ್ಪ - ನಮ್ಮೂರ ಮಾದರಿ ಸಣ್ಣ ಉದ್ದಿಮೆದಾರ


ತಿಮ್ಮಪ್ಪ ನಮ್ಮೂರಿನ ಪ್ರಸಿದ್ಧ ಜಮೀನ್ದಾರರಾಗಿದ್ದ ಹೊಸಳ್ಳಿ ವೆಂಕಪ್ಪಯ್ಯನವರ ಮಗ ಹಾಗೂ ನಮ್ಮಣ್ಣನ ಆತ್ಮೀಯ ಸ್ನೇಹಿತ. ನಮ್ಮಣ್ಣನಂತೆ ಅವನೂ ಕೂಡ ಲೋಯರ್ ಸೆಕೆಂಡರಿ ಪರೀಕ್ಷೆ ಪಾಸ್ ಮಾಡಿ ಮನೆ ಸೇರಿದ್ದ. ಆಗಿನ ಕಾಲದಲ್ಲಿ ನಮ್ಮೂರಿನ ಯಾವ ಅಪ್ಪಂದಿರಿಗೂ ತಮ್ಮ ಮಗ ಅದಕ್ಕಿಂತ ಮುಂದೆ ಓದಲೆಂಬ ಇರಾದೆಯೇ ಇರಲಿಲ್ಲ. ಏಕೆಂದರೆ ಮಗನು ಜಮೀನು ನೋಡಿಕೊಳ್ಳುವುದರಲ್ಲಿ ತಮಗೆ ಸಹಾಯ ಮಾಡಲೆಂದು ಎಲ್ಲರೂ ಬಯಸುತ್ತಿದ್ದರು. ಆದರೆ ನಮ್ಮಣ್ಣ ಮತ್ತು ತಿಮ್ಮಪ್ಪ ಇಬ್ಬರಿಗೂ ಜಮೀನು ನೋಡಿಕೊಳ್ಳುವುದರಲ್ಲಿ ಒಂದೊಂದು ಸಮಸ್ಯೆ ಇದ್ದಿತು. ನಮ್ಮಣ್ಣನ  ಸಮಸ್ಯೆ ಎಂದರೆ ನೋಡಿಕೊಳ್ಳುವಷ್ಟು ಜಮೀನು ನಮ್ಮ ತಂದೆಗೆ ಇಲ್ಲದುದು! ಆದರೆ ತಿಮ್ಮಪ್ಪನ ಸಮಸ್ಯೆ ಬೇರೆಯದೇ ಆಗಿತ್ತು. ಚಿಕ್ಕಂದಿನಲ್ಲಿ ಬಂದ ಪೋಲಿಯೊ ಕಾಹಿಲೆಯಿಂದ ಅವನ ಎರಡು ಕಾಲುಗಳೂ ಯಾವುದೇ ಕಷ್ಟದ ಕೆಲಸ ಮಾಡದಂತಾಗಿದ್ದುವು. ಹಾಗಾಗಿ ಅವನು ನಮ್ಮೂರಿನ ಇತರ ತರುಣರಂತೆ ಜಮೀನು ಕೆಲಸ ಮಾಡಲು ಅಶಕ್ತನಾಗಿದ್ದ. ಸ್ನೇಹಿತರಿಬ್ಬರ  ಪರಿಸ್ಥಿತಿ ಈ ರೀತಿ ಇದ್ದರೂ ಇಬ್ಬರಿಗೂ ಹೈಸ್ಕೂಲಿನಲ್ಲಿ ಓದುವ ಅವಕಾಶ ಮಾತ್ರ ದೊರೆಯಲಿಲ್ಲ.

ತಿಮ್ಮಪ್ಪನು ತನ್ನ ತಾಯಿಯನ್ನು ಬೇಗನೆ (ಅವನ ತಮ್ಮ ಕೃಷ್ಣರಾಯ ಹುಟ್ಟಿದ ನಂತರ) ಕಳೆದುಕೊಂಡು ಬಿಟ್ಟಿದ್ದ. ಅವನ ತಂದೆ ಆಮೇಲೆ ಪುನರ್ವಿವಾಹ ಮಾಡಿಕೊಂಡಿದ್ದರುಅವನಿಗೆ ತಾನು ಸುಮ್ಮನೆ ಮನೆಯಲ್ಲಿದ್ದರೆ ತನಗೆ ಯಾವುದೇ ಭವಿಷ್ಯವಿಲ್ಲವೆಂದು ಮನದಟ್ಟಾಗಿತ್ತು. ಹಾಗಾಗಿ ಅವನು ಯಾವುದಾದರೂ ಉದ್ದಿಮೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕೆಂದು ಆಗಲೇ ತೀರ್ಮಾನಿಸಿಬಿಟ್ಟಿದ್ದ. ತಿಮ್ಮಪ್ಪನಿಗೆ ಹುಟ್ಟಿನಿಂದಲೇ ವ್ಯವಹಾರ ಜಾಣ್ಮೆ ಇತ್ತೆಂದು ಅವನೊಡನೆ ಸ್ವಲ್ಪ ಮಾತಾಡಿದವರಿಗೆ ಸ್ಪಷ್ಟವಾಗುತ್ತಿತ್ತು. ನಮ್ಮೂರಿನಲ್ಲಿ ಕಾಲದಲ್ಲಿ ಯಾವುದೇ ವ್ಯಕ್ತಿಯನ್ನು ಅವನ ವ್ಯವಹಾರ ಜ್ಞಾನದ ಆಧಾರದ  ಮೇಲೆ ನಾಲ್ಕು ವಿಧವಾಗಿ ಗುರುತಿಸಲಾಗುತ್ತಿತ್ತು. ಅವೆಂದರೆ ದಡ್ಡ ಅಥವಾ ಶತ ದಡ್ಡ  ಮತ್ತು ಬುದ್ಧಿವಂತ ಅಥವಾ ಮಹಾ ಬುದ್ಧಿವಂತ. ತಿಮ್ಮಪ್ಪ ನಿಸ್ಸಂದೇಹವಾಗಿ ಅದರಲ್ಲಿ ನಾಲ್ಕನೇ ವರ್ಗದಲ್ಲಿ ಗುರುತಿಸಲ್ಪಟ್ಟಿದ್ದ.

ಆಗಿನ ಕಾಲದ ಮಲೆನಾಡ ರೈತರಿಗೆ ವ್ಯವಸಾಯ ಜ್ಞಾನದಷ್ಟೇ ಮುಖ್ಯವಾಗಿ ವ್ಯವಹಾರ ಜ್ಞಾನವೂ ಅವಶ್ಯವಾಗಿತ್ತು. ಏಕೆಂದರೆ ಅವರು ಬೆಳೆದ ಅಡಿಕೆಯನ್ನು ಮನೆಯಿಂದಲೇ ಕೊಂಡೊಯ್ಯಲು ಮುಸಲ್ಮಾನ ವ್ಯಾಪಾರಿಗಳು ನಮ್ಮೂರಿಗೆ ಹಾಜರಾಗುತ್ತಿದ್ದರು. ತುಂಬಾ ನಯವಾದ ಕನ್ನಡ  ಭಾಷೆಯಲ್ಲೇ ಮಾತಾಡುತ್ತಾ ಅತಿ ಕಡಿಮೆ ಬೆಲೆಗೆ ವ್ಯಾಪಾರವನ್ನು ಕುದುರಿಸುವುದರಲ್ಲಿ ಅವರು ನಿಷ್ಣಾತರಾಗಿದ್ದರು. ಪ್ರಾಯಶಃ ತಿಮ್ಮಪ್ಪನೂ ಅವರಿಂದ ಸ್ವಲ್ಪ ಸ್ಪೂರ್ತಿ ಪಡೆದಿರಬೇಕು.

ನಾವು ಚಿಕ್ಕವರಾಗಿದ್ದಾಗ ಕಂಡಂತೆ ತಿಮ್ಮಪ್ಪ ಮೊದಲು ಕೊಪ್ಪ ಮತ್ತು ಚಿಕ್ಕಮಗಳೂರಿಗೆ ನಮ್ಮೂರಿನಿಂದ  ಬಾಳೆಕಾಯಿ ಮುಂತಾದ ಪದಾರ್ಥಗಳನ್ನು ಮಾರಲು  ಕೊಂಡೊಯ್ಯುತ್ತಿದ್ದ. ಹಾಗೆಯೇ ನಮ್ಮೂರಿನಲ್ಲಿ ಯಕ್ಷಗಾನ ಪ್ರಸಂಗಗಳು ನಡೆಯುವಾಗ ಹಾಗೂ ಗಣಪತಿ ದೇವಸ್ಥಾನದಲ್ಲಿ ದೀಪಾರಾಧನೆ ನಡೆಯುವಾಗ ಅಲ್ಲೊಂದು ತಾತ್ಕಾಲಿಕ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದ. ಅವನಿಗೆ ತನ್ನದೇ ಆದ  ಒಂದು ಅಂಗಡಿಯನ್ನು ತೆರೆದು ವ್ಯಾಪಾರ ಪ್ರಾರಂಭ ಮಾಡಬೇಕೆಂದು ಗುರಿಯಿತ್ತು. ಆದರೆ ಅದಕ್ಕೆ ಸೂಕ್ತವಾದ ಸ್ಥಳ ಯಾವುದೆಂದು ಗುರುತಿಸುವುದು ಕಷ್ಟವಾಗಿತ್ತು. ಅವನು ಎಷ್ಟೋ ಬಾರಿ ನಮ್ಮ ಮನೆಗೆ ಬಂದು ತಂದೆಯವರೊಡನೆ ನಮ್ಮ ಅಣ್ಣನನ್ನು ಅವನ ಪಾಲುದಾರನಾಗಿ ಮಾಡಿಕೊಳ್ಳಲು ಅವಕಾಶ ಕೇಳಿಕೊಂಡಿದ್ದ. ಆದರೆ ಕೊನೆಗೂ ತಂದೆಯವರು ಒಪ್ಪಿಗೆ ನೀಡಲಿಲ್ಲ.

ನಮ್ಮೂರಿನಿಂದ ನಾಲ್ಕು ಮೈಲಿ ದೂರದಲ್ಲಿ ಜಯಪುರ-ಶೃಂಗೇರಿ ರಸ್ತೆಯಲ್ಲಿ ಅಗಳಗಂಡಿ ಎಂಬ ಊರಿದೆ. ಕೆರೆಮನೆ ತಿಮ್ಮಪ್ಪಯ್ಯ ಎಂಬ ಜಮೀನ್ದಾರರು ಪಂಚಾಯತಿ ಅಧ್ಯಕ್ಷರಾಗಿದ್ದಾಗ ಗ್ರಾಮಕ್ಕೆ ಮಾದರಿ ಗ್ರಾಮ ಎಂಬ ಬಿರುದು ಸಿಕ್ಕಿತು. ಶೃಂಗೇರಿಯಲ್ಲಿ ತುಂಗಾ ನದಿಗೆ ೧೯೫೦ನೇ ದಶಕದಲ್ಲಿ ಸೇತುವೆ ನಿರ್ಮಾಣವಾದಾಗ ಅಗಳಗಂಡಿಗೆ ಇದ್ದಕ್ಕಿದ್ದಂತೆ ಪ್ರಾಮುಖ್ಯತೆ ಬಂದು ಬಿಟ್ಟಿತು. ಚಿಕ್ಕಮಗಳೂರಿನಿಂದ ಶೃಂಗೇರಿಗೆ ಹೋಗುವ ಬಸ್ಸುಗಳಿಗೆ ಅಗಳಗಂಡಿಯ ಮೇಲೆ ಅತಿ ಕಡಿಮೆ ದೂರದಲ್ಲಿ ಪ್ರಯಾಣ ಮಾಡುವಂತಾಯಿತು. ಅದಕ್ಕೆ ಮೊದಲು ಬಸ್ಸುಗಳು ಕೊಪ್ಪ-ಹರಿಹರಪುರ ಮಾರ್ಗದ ಬಳಸು ದಾರಿಯಲ್ಲಿ ಹೋಗಬೇಕಾಗಿತ್ತು. ಸಮಯ ನೋಡಿ ತಿಮ್ಮಪ್ಪ ತನ್ನ ತಮ್ಮ ಕೃಷ್ಣರಾಯನೊಡಗೂಡಿ ಅಗಳಗಂಡಿಯಲ್ಲಿ ಒಂದು ಅಂಗಡಿ ತೆರೆದು ಬಿಟ್ಟ. ಅದಕ್ಕೆ ಸೂಕ್ತವಾದ ಬಂಡವಾಳ ಅವನ ತಂದೆ ವೆಂಕಪ್ಪಯ್ಯನವರಿಂದ ಸಿಕ್ಕಿತು.

ಅಗಳಗಂಡಿ ಊರಿನ ಬೆಳವಣಿಗೆ ಆದಂತೆ ತಿಮ್ಮಪ್ಪನ ಅಂಗಡಿಯ ವ್ಯಾಪಾರವೂ ಬೆಳೆಯುತ್ತ ಹೋಯಿತು. ಸುತ್ತಮುತ್ತ ಯಾವುದೇ ಅಂಗಡಿಗಳು ಇಲ್ಲದೇ ಇದ್ದುದು ಕೂಡ ಅಂಗಡಿಯ ಬೆಳವಣಿಗೆಗೆ  ಕಾರಣವಾಯಿತು. ತಿಮ್ಮಪ್ಪನು  ಒಂದು ಗುರಿ ಇಟ್ಟುಕೊಂಡಿದ್ದ. ಅದೇನೆಂದರೆ ಯಾವುದೇ ಗಿರಾಕಿ ತನಗೆ ಬೇಕಾಗಿದ್ದ ವಸ್ತು ತಿಮ್ಮಪ್ಪನ ಅಂಗಡಿಯಲ್ಲಿ ಸಿಗಲಿಲ್ಲವೆಂದು ವಾಪಾಸ್ ಹೋಗಬಾರದೆಂದು. ಅದಕ್ಕಾಗಿ ಅವನು ಒಂದು ಪುಸ್ತಕದಲ್ಲಿ ಗಿರಾಕಿಗಳು ಕೇಳಿ ಅಂಗಡಿಯಲ್ಲಿ ಇರದಂತ ಸಾಮಾನುಗಳನ್ನು ಬರೆದಿಡುತ್ತಿದ್ದ. ಇನ್ನೊಮ್ಮೆ  ಗಿರಾಕಿ ಬಂದಾಗ   ಸಾಮಾನು ಅಂಗಡಿಯಲ್ಲಿ ಇರುವಂತೆ ಮಾಡುವುದೇ ಅವನ ಉದ್ದೇಶವಾಗಿತ್ತು. ರೀತಿಯಲ್ಲಿ ಅಂಗಡಿಯಲ್ಲಿರುವ ಸಾಮಾನುಗಳ ಸಂಖ್ಯೆ  ಹೆಚ್ಚುತ್ತಾ ಅದರಂತೆ ವ್ಯವಹಾರವೂ ಹೆಚ್ಚುತ್ತಾ ಹೋಯಿತು.

ದಿನಗಳಲ್ಲಿ ಹಳ್ಳಿಗಳಲ್ಲಿ ಕಡ ಕೇಳುವ ಜನ ಜಾಸ್ತಿಯಾಗಿದ್ದರು. ಊರಿನ ಜನರೆಲ್ಲರೂ ಪರಿಚಯಸ್ಥರೇ ಆಗಿದ್ದರಿಂದ ಸಾಮಾನುಗಳನ್ನು ಕಡ ಕೊಡುವುದಿಲ್ಲವೆಂದು ನಿರ್ದಾಕ್ಷಿಣ್ಯವಾಗಿ ಹೇಳುವುದು ಕಷ್ಟವಾಗಿತ್ತು. ಆದರೆ ಹಾಗೆ ಕಡ ಕೊಡುತ್ತಾ  ಹೋದರೆ ಅಂಗಡಿಯನ್ನು ಮುಚ್ಚುವ ಸಂದರ್ಭ ಬರುವುದರಲ್ಲಿ ಆಶ್ಚರ್ಯವಿರಲಿಲ್ಲ. ಅದಕ್ಕಾಗಿ ತಿಮ್ಮಪ್ಪ ಒಂದು ಪ್ಲಾನ್ ಮಾಡಿದಅಂಗಡಿಯ ಮುಂದೆ ಕಡ ನಾಳೆ ಎಂದು  ಒಂದು ಬೋರ್ಡ್ ಬರೆಸಿ ಹಾಕಿಬಿಟ್ಟ. ಯಾರೇ ಕಡ ಕೇಳಿದರೂ ಬೋರ್ಡಿನ ಕಡೆ ಕೈ ತೋರಿಸುತ್ತಿದ್ದ.

ತಿಮ್ಮಪ್ಪನ ವ್ಯವಹಾರ  ಬೆಳೆದು ಅವನು ಸ್ವಂತ ಮನೆ ಮತ್ತು ಅಂಗಡಿ ಕಟ್ಟಿಸುವಷ್ಟಾಯಿತು. ಇಷ್ಟರಲ್ಲೇ ಅವನಿಗೆ ನಮ್ಮೂರಿನವಳೇ ಆದ ಹುಡುಗಿಯೊಬ್ಬಳೊಡನೆ ವಿವಾಹ ನಿಶ್ಚಯವೂ ಆಯಿತು. ದೈವ ಕೃಪೆಯಿಂದ ಅವನಿಗೆ ದಾಂಪತ್ಯ ಜೀವನದಲ್ಲಿ ಯಾವುದೇ ಕೊರತೆ ಉಂಟಾಗಲಿಲ್ಲ. ಅದೊಂದು ಅನ್ಯೋನ್ಯ ದಾಂಪತ್ಯವೇ ಆಗಿತ್ತು. ತಿಮ್ಮಪ್ಪನು ಮೂಲತಃ ರೈತ ಕುಟುಂಬದಿಂದ ಬಂದವನಾಗಿದ್ದರಿಂದ ಅವನಿಗೆ ವ್ಯವಸಾಯದಲ್ಲಿಯೂ ಆಸಕ್ತಿ ಇತ್ತು. ಅವನು ಸ್ವಲ್ಪ ಜಮೀನನ್ನು ಕೊಂಡು ಅದರಲ್ಲಿ ಕಾಫಿ ಗಿಡಗಳನ್ನು ಬೆಳೆಸಿದತನಗೆ ಸ್ವತಹಃ ತೋಟದ ಬಳಿಗೆ ಹೋಗಲಾಗದಿದ್ದರೂ ತಮ್ಮ ಕೃಷ್ಣರಾಯನ ಮೂಲಕ ಒಂದು ಕಾಫಿ ಎಸ್ಟೇಟ್ ಮಾಡಿ ಅದರ ಒಡೆಯನಾಗಿಬಿಟ್ಟ.

ತಿಮ್ಮಪ್ಪ ನಮ್ಮಣ್ಣನ ಆತ್ಮೀಯ ಸ್ನೇಹಿತನೆಂದು ಆಗಲೇ  ಬರೆದಿದ್ದೇನೆ. ದಿನಗಳಲ್ಲಿ ನಮ್ಮ ಸಂಸಾರದ ಹಣಕಾಸಿನ ಪರಿಸ್ಥಿಥಿ ತುಂಬಾ ಹದಗೆಟ್ಟಿತ್ತು. ಹಾಗಾಗಿ ಹಲವು ಬಾರಿ ನಮ್ಮಣ್ಣ ನಮ್ಮಿಬ್ಬರನ್ನೂ (ಪುಟ್ಟಣ್ಣ ಮತ್ತು ನಾನು) ತಿಮ್ಮಪ್ಪನ ಅಂಗಡಿಗೆ ಸಾಮಾನುಗಳನ್ನು ಕಡದಲ್ಲಿ ಕೊಡುವಂತೆ ಪತ್ರ  ಬರೆದು ಕಳಿಸುತ್ತಿದ್ದನಾವು ಪ್ರಥಮ ಬಾರಿಗೆ ರೀತಿ ಹೋದಾಗ  ಅಂಗಡಿಯ ಮುಂದಿದ್ದ ಕಡ ನಾಳೆ ಎಂಬ ಬೋರ್ಡ್ ನಮ್ಮ ಕಣ್ಣಿಗೆ ಬಿದ್ದು ತುಂಬಾ ಮುಜುಗರವಾಯಿತು. ತುಂಬಾ ಸಂಕೋಚದಿಂದಲೇ ನಾವು ಪತ್ರವನ್ನು ಅವನ  ಕೈಗಿಟ್ಟೆವು. ಆದರೆ ಸ್ನೇಹ ಯಾವ ಮಟ್ಟದಲ್ಲಿ ಇತ್ತೆಂದರೆ ಅವನು ಕೂಡಲೇ ಅಂಗಡಿಯ ಹುಡುಗರಿಗೆ ನಮ್ಮಣ್ಣನ ಪಟ್ಟಿಯಲ್ಲಿದ್ದ  ಎಲ್ಲ ಸಾಮಾನುಗಳನ್ನೂ ನಾವು ಕೊಂಡೊಯ್ದ ಚೀಲಗಳಲ್ಲಿ ತುಂಬಿಸುವಂತೆ ಆರ್ಡರ್ ಮಾಡಿಬಿಟ್ಟ! ಆಮೇಲೆಯೂ ಕೆಲವು ಬಾರಿ ನಾವು ಅದೇ ರೀತಿ ಅಣ್ಣನ ಪತ್ರದಂತೆ ಸಾಮಾನುಗಳನ್ನು ತಂದುದು ನಮ್ಮ ನೆನಪಿನಿಂದ ಇವತ್ತಿಗೂ ಮಾಸಿಲ್ಲ. ಅಷ್ಟು ಮಾತ್ರವಲ್ಲ. ಹಲವು ಬಾರಿ ನಾವು ನಮ್ಮೊಡನೆ ಸ್ವಲ್ಪ ಹಣವನ್ನು ಕೊಂಡೊಯ್ದು ಅವನಿಗೆ ಕೊಡಲು ಹೋದಾಗ ಅದನ್ನು ವಾಪಾಸ್ ನಮ್ಮ ಜೇಬಿಗೆ ತುರುಕಿದ್ದೂ ಕೂಡ ನೆನಪಿಗೆ ಬರುತ್ತಿದೆ.

ನಾನು ಶೃಂಗೇರಿ ಕಾಲೇಜಿನಲ್ಲಿ ಓದುತ್ತಿದ್ದಾಗ ಹಲವು ಬಾರಿ ತಿಮ್ಮಪ್ಪನ ಅಂಗಡಿಯ ಮುಂದೆ ಬಸ್ ಹತ್ತಿ ಹೋಗುತ್ತಿದ್ದೆ. ಆಗ ತಿಮ್ಮಪ್ಪ ನನ್ನನ್ನು ಕರೆದು ಕೆಲವು ನೋಟ್ ಬುಕ್ಕುಗಳನ್ನೂ ನನ್ನ ಚೀಲದೊಳಗೆ ತುರುಕುತ್ತಿದ್ದ. ಹಾಗೂ ಸ್ವಲ್ಪ ಹಣವನ್ನು ಜೇಬಿನಲ್ಲಿಡುತ್ತಿದ್ದ. ನನ್ನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದು ಅವನ ಉದ್ದೇಶವಾಗಿತ್ತು. ಆಮೇಲೆ ಅವನ ಮಗಳು ಓದಿನಲ್ಲಿ ಜಾಣೆಯಾಗಿ ವೈದ್ಯಕೀಯ ಪದವಿ ಪಡೆದು ಈಗ ಸಾಗರ ಪಟ್ಟಣದಲ್ಲಿ  ವೈದ್ಯಕೀಯ ಪದವೀಧರನೇ ಆದ ತನ್ನ ಗಂಡನೊಂದಿಗೆ ವೃತ್ತಿಯನ್ನು ನಡೆಸುತ್ತಿರುವುದು ತುಂಬಾ ಸಂತೋಷದ ವಿಷಯ.

ಇಂದು ತಿಮ್ಮಪ್ಪ ಮತ್ತು ನಮ್ಮಣ್ಣ ಇಬ್ಬರೂ ತೀರಿ ಹೋಗಿ ಎಷ್ಟೋ ವರ್ಷಗಳು ಸಂದಿವೆ. ಅವರಿಬ್ಬರ  ಸ್ನೇಹ ಕೊನೆಯವರೆಗೂ ಹಾಗೆ ಮುಂದುವರೆದಿತ್ತು. ತಿಮ್ಮಪ್ಪನ ವ್ಯಕ್ತಿತ್ವ ಮತ್ತು ಅವನ ವ್ಯವಹಾರ ಜಾಣ್ಮೆ ಇಂದಿನ ತರುಣ ವ್ಯವಹಾರಸ್ಥರಿಗೆ ಮಾದರಿಯಾಗಿದೆ. ತನ್ನ ದೇಹ ಶಕ್ತಿಯಲ್ಲಿ ಕೊರತೆ ಇದ್ದರೂ ಯಾವುದೇ ಕೀಳರಿಮೆ ಇಲ್ಲದೇ ಒಂದು ಅಂಗಡಿಯನ್ನು ಕಟ್ಟಿ ಬೆಳೆಸಿ ತನ್ನ ಮುಂದಿನ ಪೀಳಿಗೆ ಸುಖವಾಗಿ ಬಾಳುವಂತೆ ಮಾಡಿ ಹೋದ ಮಹಾನುಭಾವ ನಮ್ಮ ತಿಮ್ಮಪ್ಪ. ದೇವರು ಅವನ ಆತ್ಮಕ್ಕೆ ಶಾಂತಿಯನ್ನೀಯಲಿ.



Monday, December 19, 2016

The Story of a Malnad Boy-66


The summer holidays saw us working hard at home to ensure that all the preparations for facing the rainy season which would start from the last week of May. Our whole aim was to ensure that our parents could carry on in our absence once our classes started in July. I have, in an earlier episode, covered the type of work we had to complete during this particular period in our part of Malnad. My elder brother (AVL) had somehow settled down in Bangalore with the meagre support from home. From our Malnad region hardly anybody had gone for the B.Com degree till then. I came to know that one could learn a lot in the matter of business through the commerce education. He had developed a big friends’ circle in Bangalore. Both of us used to exchange our experiences – the struggle we had to carry on to remain afloat and somehow continue our education.

I used to receive a good number of letters from my hostelmates in that summer. Most of them would write a lot praising my efforts in guiding them. They would also invariably write that they felt lucky to have a rank student as their friend. Some of these letters used to look rather funny! My younger brothers used to read them loudly and make fun! My earlier roommate Nanjundaswami wanted me to visit his house in a place called Lingadahalli in Tarikere taluk. He had also written that from there both of us could visit Birur and Kadur to meet our other hostel mates. The Kadur, Birur and Tarikere areas in our Chickmagalore district were known as ‘bayalu seeme’ (Plains) areas as against our Malnad areas.

I started my journey one fine morning and reached Chickmagalore on my way. It was my second visit to the town after my first visit with my father in my childhood days. Actually not much had changed in this sleepy town. In fact it was very difficult to say that it was the district headquarters. I took another bus from here and reached Lingadahalli, a small typical village in the plains. I was glad to see Nanjundaswami waiting for me at the bus stand. Having been brought up in a typical Malnad village, this place looked rather strange to me. Nanjundaswami’s parents were very kind to me; they said they had heard a lot about me from their son. I was served their typical food-jowar roti and bhaji. In the evening we went round the place. The village had only a few sweet water wells. Every home had to collect the sweet water only from those wells which were far away from their homes. When I saw this I felt how lucky we were at our village to get sweet natural water flowing into our houses. I stayed overnight in the place. We decided to visit the hill station Kemmannugundi next morning.

In the morning we took a bus and reached the bottom of the famous hills. We learnt that there were only one or two busses which were going to the top of the hill. We had missed the morning bus!

We both felt that there was no point in waiting for the bus till afternoon. Hence we started our upward journey on our feet! Initially we both were in full spirits and found it easy to climb the hill through the road. The stream of water flowing down from the top of the hill by the side of the road was indeed a pleasure to see.  But as the sun started shining over our heads sharply, we started to get tired. Our efforts to stop one or two coffee plantation jeeps were not successful.

We continued our journey and reached a point from which a deviation road took us to the beautiful Kallathi water falls. We were very much relieved to reach this pleasant place and took our bath in the beautiful water falls. The temple here belongs to the times of the Vijayanagar Empire. The water cascades from a height of 122 metres. According to a legend, this place is associated with the great Hindu sage Agastya. We spent a good amount of time here and started our journey again. We learnt that the hill station was another 10 kms from this place.

We were in for luck now. A passing Jeep stopped by and a nice gentleman was kind enough to enquire whether we wanted a lift. We simply got in, thanking him profusely. Now we were really pleased to enjoy the scenery around and down below. Within a short time we were at the top of the hill station. But we were in for really some bad luck here. There was only a single canteen and no other hotel. The canteen had prepared a limited number of meals which had been sold out. No amount of request and persuasion by us could help in making the owner to prepare some food for us. He told us point blank that we had to wait till 8 pm in the night to have our evening meals. He also gave us another warning. Right then there were no tourists on the hills.  He told us that unless a minimum of five tourists arrived by night, he would not even cook the dinner!
We were damn hungry by that time. We were just crazy for food. We went around and managed to get some bananas to get some relief. But the threat by the canteen owner was looming large over us!

P. Kalinga Rao
P.
ಕಾಳಿಂಗ ರಾವ್‌
Born
1914
Origin
Died
September 21, 1981
Occupation(s)
We could not imagine going to bed without having our meals! We started praying for the arrival of tourists. Meanwhile we contacted the Horticulture office and managed to get a cottage for our stay. It was a nice cottage with a beautiful view of the hill.  We also went around the Raj Bhavan built by the famous Krishna Raja Wodeyar IV of Mysore. It was being managed by the horticulture department. By that time it was getting dark all over the hills and we could get a beautiful view of the places below. But we were slowly getting perturbed by the total absence of the arrival of any tourists. It appeared that we were destined to spend a very hungry night on the famous hills! We started praying Dattatreya and the saint Baba Budan alternatively requesting them to make some tourists arrive and let the canteen owner cook some food for us! We were totally secular when it came to our basic need- the food!

We were not quite sure who obliged us in the end! As against the minimum five tourists prescribed by the canteen owner, a van full of tourists arrived suddenly as if from nowhere! In fact they ordered a special dinner including sweets for their troupe. Naturally we were also to get the same special dinner! Just a few minutes ago we were not guaranteed even some rice and rasam. But we were now preparing to eat the special dinner! Oh God! The Gracious!
We were actually destined for more! We suddenly realised that the troupe was headed by none other than the nightingale of Karnataka- the famous Kannada singing star, P. Kalinga Rao. I had seen him singing earlier in a Kannada film. I had heard a good number of his gramophone records also. Hence I was thrilled to see him with his two well-known accomplices-Mohan Kumari and Sohan kumari. We got a hunch that the troupe would conduct a music programme in the night.
With the famous troupe in mind, the canteen owner prepared the best dinner possible. We two were virtually on empty stomachs since our early breakfast in Lingadahalli. Under the circumstances we enjoyed the food thoroughly. Thanks to Dattatreya and Baba Budan!

Immediately after the dinner the troupe started its performance in the hall at the Raj Bhavan. I was thrilled to hear the famous songs-Barayya beladingale, Brahma ninage Jodistheeni, Moodal Kunigal kere, Anthintha hennu neenalla. When I look back on this particular event in my life I feel it was one of the most memorable moments. The memory lingers on even to this day!

In the morning we went to see the iron ore mines. We could see the iron ore being loaded and transported to a place called Tanigebail on the rope-way. From there the ore was being transported to Bhadravathi factory by lorries. After having our breakfast we went to see another water falls called Hebbe Falls at distance of about 8 kms.  Here the water streams down from a height of 168 meters in two stages to form Dodda Hebbe and chikka Hebbe falls. It was a pleasant sight to see the water falling from great heights.


We started our return journey and reached Lingadahalli in the afternoon. An adventurous trip had come to an end.

The next morning we left for Birur to meet my friend Shivashankar and his family. Shivashankar was very happy to receive us. The Margada family was a very well known super rich family in the Birur and Kadur area. The family had vast lands and many business ventures in the two towns including a petrol pump. Shivashankar’s father Margada Mallappa, a practicing advocate and MLA, was the head of the family. He was a thorough gentleman with impeccable manners. As mentioned by me earlier, he later rose to become the Health minister of Karnataka. He treated us with great humility and asked us to stay for sometime with them. The family stayed in a vast bungalow.

We had a nice time in the place for two days enjoying the courtesies of the family. We also visited Kadur and met another hostel mate by name Kantha Raj. Kantha Raj was a dark handsome boy who excelled in the NCC in our college. We were gladly received by his family.

The next day we departed from the place. Nanjundaswami left for Lingadahalli and I caught a bus to Chickmagalore on my way back to my village. My trip to my friends’ places had come to a successful end.
------- (To be continued)

Saturday, December 17, 2016

ನನ್ನ ಬಾಲ್ಯ


ಅಧ್ಯಾಯ
ನಮ್ಮೂರಿನ ಇತಿಹಾಸ
ನಮ್ಮೂರು ಆಗಿನ ಕಾಲದ ಮಲೆನಾಡಿನಲ್ಲೇ ಒಂದು ಅತ್ಯಂತ ಸುಂದರವಾದ ಊರಾಗಿತ್ತೆಂದರೆ ಅತಿಶಯೋಕ್ತಿಯಲ್ಲ. ಖಂಡಿತವಾಗಿಯೂ ನೂರಾರು ವರ್ಷಗಳ ಹಿಂದೆ ಯಾವನೋ ದೊಡ್ಡ ಇಂಜಿನಿಯರ್ ಒಂದು ಸ್ಕೆಚ್ ಹಾಕಿ ನಮ್ಮೂರನ್ನು ಒಂದು ಸುಂದರ ಕಣಿವೆಯಲ್ಲಿ ಕೆರೆ ಕಟ್ಟೆಗಳ ಹಾಗೂ ಅಡಿಕೆ ಮತ್ತು ಬಾಳೆ ತೋಟಗಳ ನಡುವೆ ತಯಾರು ಮಾಡಿರಬೇಕು. ತೋಟಗಳು ನಮ್ಮ ಗ್ರಾಮದ ಹೆಸರಾದ ಬೆಳವಿನಕೊಡಿಗೆ ಎಂಬ ಮನೆಯಿಂದ ಶುರುವಾಗಿ ಒಂದು ಕಾಲದಲ್ಲಿ ಪುರದಮನೆ ಎಂದು ಪ್ರಸಿದ್ಧವಾಗಿದ್ದ ಮನೆಯ ಮುಂದಕ್ಕೂ  ಸ್ವಲ್ಪ ದೂರಕ್ಕೆ ಹರಡಿದ್ದವು. ತೋಟದ ಇನ್ನೊಂದು ತುದಿಯಲ್ಲಿ ನಾವು ಚಿಕ್ಕಂದಿನಲ್ಲಿ ಕಂಡಂತೆ ಗೋಳಿಕಟ್ಟೆ ಎಂಬ ಮನೆಯನ್ನು ಸರಿ  ಸುಮಾರು ೧೯೫೫ ನೇ ಇಸವಿಯಲ್ಲಿ ಹೊಸದಾಗಿ ಕಟ್ಟಲಾಯಿತು. ತೋಟದ ಸಾಲಿನ ಮಧ್ಯದಲ್ಲಿ ಅಲ್ಲಲ್ಲಿ ನಡುವಿನಮನೆ, ಸಂಪಿಗೆಕೊಳಲು, ಅಡೇಖಂಡಿ  ಮತ್ತು ಮೊದಲಮನೆ ಎಂಬ ಮನೆಗಳು ಇದ್ದು ಅಲ್ಲಿ ಬೇರೆಬೇರೆ ಸಂಸಾರಗಳು ವಾಸಿಸುತ್ತಿದ್ದವು. ಊರಿನ ಮೂರು ಭಾಗದಲ್ಲೂ ಬೆಟ್ಟ ಗುಡ್ಡಗಳಿದ್ದು ಒಂದು ಬೆಟ್ಟದ ಕೆಳಭಾಗದಲ್ಲಿ ಪವಿತ್ರವಾದ ತುಂಗಾ ನದಿ ಹರಿಯುತ್ತಿತ್ತು.  ಊರಿನ ಇನ್ನೊಂದು ತುದಿಯಲ್ಲಿ ಬತ್ತದ ಗದ್ದೆಗಳಿದ್ದವು. ಮಕ್ಕಿಗದ್ದೆಯೆಂದು ಕರೆಯುತ್ತಿದ್ದ ಗದ್ದೆಯ ಮುಂದೆ ಊರಿಗೆ ಮುಖ್ಯವಾದ ಗಣಪತಿ ಕಟ್ಟೆ (ದೇವಸ್ಥಾನ) ಇತ್ತು. ನಮ್ಮ ಊರಿನ ಇತರ ಭಾಗಗಳೆಂದರೆ ಹೊಸಳ್ಳಿ, ಬಾಳೆಹಿತ್ಲು, ಕನಮಡ್ಲು, ಅರದಳ್ಳಿ, ಮೇಲಿನಕೊಡಿಗೆ, ಚಿಟ್ಟೆಮಕ್ಕಿ, ಬಾಳೆಹಕ್ಲು, ಕೆಳಕೊಡಿಗೆ, ಹುರುಳಿಹಕ್ಲು, ಇತ್ಯಾದಿ

ಮಕ್ಕಿಗದ್ದೆಯ ಅಂಚಿನಲ್ಲಿದ್ದ ಒಂದು ಜೈನ ಶಾಸನ ಒಂದು ಕಾಲದಲ್ಲಿ ನಮ್ಮೂರಿನಲ್ಲಿ ಜೈನರು ವಾಸಿಸುತ್ತಿದ್ದರೆಂದು ಸೂಚಿಸುತ್ತಿತ್ತು. ಪ್ರಾಯಶಃ ಶಂಕರಾಚಾರ್ಯರು ಶೃಂಗೇರಿಯಲ್ಲಿ ಮಠ ಸ್ಥಾಪಿಸಿದಮೇಲೆ ಹೆಬ್ಬಾರರೆಂದು ಕರೆದುಕೊಳ್ಳುವ ಸ್ಮಾರ್ತ ಸಂಪ್ರದಾಯದ  ನಮ್ಮ ಜನಾಂಗ ಮಲೆನಾಡಿಗೆ ವಲಸೆ ಬಂದು ಹಾಗೆಯೇ ನಮ್ಮೂರಿಗೂ ಪ್ರವೇಶಿಸಿ ಅಡಿಕೆ ಮತ್ತು ಬತ್ತದ ಬೇಸಾಯದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರಬೇಕು. ಆದರೆ ಒಂದು ಕಾಲದಲ್ಲಿ ತುಂಬಾ ಪ್ರಸಿದ್ಧವಾಗಿ ವಾರ್ಷಿಕ ಜಾತ್ರೆ ಮತ್ತು ತೇರು ನಡೆಯುತ್ತಿದ್ದ ನಮ್ಮೂರ  ದೇವಸ್ಥಾನ ಯಾವುದೊ ಕಾರಣಕ್ಕೆ ತನ್ನ ಹಿರಿಮೆಯನ್ನು ಕಳೆದುಕೊಂಡಿರಬೇಕು. ಅದಕ್ಕೆ ಸಾಕ್ಷಿಯಾಗಿ ನಾವು ಚಿಕ್ಕಂದಿನಲ್ಲಿ ಕಂಡಂತೆ ದೇವಸ್ಥಾನದ ಪಕ್ಕದಲ್ಲಿದ್ದ ಬಾವಿ  ಪಾಳುಬಿದ್ದಿತ್ತು. ದೇವಸ್ಥಾನದ ಇನ್ನೊಂದು ಬದಿಯಲ್ಲಿ ತುಂಬಾ ಹಳೆಯ  ಹಾಗೂ ಸುಂದರವಾದ ಮರದ ತೇರೊಂದು ಮುರಿದು ಬಿದ್ದಿತ್ತು. ಅದರಲ್ಲಿದ್ದ ಎಷ್ಟೋ ಸುಂದರವಾದ ಪ್ರಾಣಿ ಪಕ್ಷಿಗಳ ಗೊಂಬೆಗಳು ಹಲವರ ಮನೆಯಲ್ಲಿ ಮಕ್ಕಳ ಆಟದ ಸಾಮಾನುಗಳಾಗಿ ಗೋಚರಿಸುತ್ತಿದ್ದವು.

ಸರಿ ಸುಮಾರು ೧೯೬೭ನೇ ಇಸವಿಯಲ್ಲಿ ಶೃಂಗೇರಿ JCBM ಕಾಲೇಜಿನಿಂದ ಪ್ರೊಫೆಸರ್ ಸುಂದರ್ (History Professor) ಅವರ ನೇತೃತ್ವದಲ್ಲಿ ಒಂದು ಪುರಾತತ್ವ ಪರಿಶೋಧನಾ ತಂಡ ನಮ್ಮೂರಿಗೆ ಆಗಮಿಸಿತ್ತು. ತಂಡ ನಮ್ಮೂರಿನ ಗಣಪತಿ ದೇವಸ್ಥಾನದ ಸ್ವಲ್ಪ ಮುಂದಿನ ಜಾಗದಲ್ಲಿ ಉತ್ಕತನ  ಮಾಡಿ ಸಂಶೋಧನೆ ನಡೆಸಿತು. ಹಾಗೂ ಒಂದು ವರದಿಯನ್ನು ತಯಾರು ಮಾಡಿತು. ವರದಿ  ಅಂದಿನ ಪ್ರಜಾವಾಣಿ ಪತ್ರಿಕೆಯ ಮುಂದಿನ ಪುಟದಲ್ಲೇ ಚಿಕ್ಕ ಸಮಾಚಾರ ರೂಪದಲ್ಲಿ ಪ್ರಕಟವಾಗಿತ್ತು. ಅದರ ಪ್ರಕಾರ ನಮ್ಮೂರಿಗೆ ಪುರಾತನ ಸಂಸ್ಕೃತಿ ಹಾಗೂ ಚರಿತ್ರೆ ಇತ್ತು. ಆದರೆ ಸಂಶೋಧನೆ ಅಲ್ಲಿಗೇ ಮುಕ್ತಾಯಗೊಂಡಿದ್ದು ನಮ್ಮ ದುರಾದೃಷ್ಟ

ಊರಿನ ಒಂದು ಭಾಗದಲ್ಲಿದ್ದ ಬೆಟ್ಟದಮೇಲೆ ಓರಣಕಲ್ ಎಂಬ ದೊಡ್ಡ ಗುಹೆ ಇತ್ತು. ನಾವು ಚಿಕ್ಕವರಾಗಿದ್ದಾಗ ಪ್ರತಿ ವರ್ಷವೂ ಗುಹೆಗೆ ಹುಲಿಗಳು ಬೇರೆ ಬೇರೆ ಕಾಡಿನಿಂದ ಬಂದು ಕ್ಯಾಂಪ್ ಮಾಡುತ್ತಿದ್ದವು. ನಮ್ಮ ಎಷ್ಟೋ ಜಾನುವಾರುಗಳು ಹುಲಿಗಳಿಗೆ ಬಲಿಯಾಗುತ್ತಿದ್ದವು. ಬೆಟ್ಟದ ಕೆಳಭಾಗದಲ್ಲಿ ಹಾಗೂ  ತೋಟಗಳ ಕಣಿವೆಯ ಮೇಲ್ಭಾಗದಲ್ಲಿ ಒಂದು ಕಾಡುಕಲ್ಲುಗಳ ಕಟ್ಟಣೆಯ ಸಂದಿಯಿಂದ ನೀರು ದೊಡ್ಡದಾಗಿ ಹರಿದು ಬರುತ್ತಿತ್ತು. ನೀರಿಗೆ ಸ್ವಲ್ಪ ದೂರದಲ್ಲಿ ಒಂದು ಕೆರೆಕಟ್ಟಲಾಗಿದ್ದು ಅದಕ್ಕೆ ದೇವರಮನೆ ಕೆರೆ ಎಂದು ಕರೆಯಲಾಗುತ್ತಿತ್ತು. ಹಾಗೆ ಕರೆಯಲು ಒಂದು ವಿಶಿಷ್ಟ ಕಾರಣವಿತ್ತು.

ಕೆರೆಯ ಮೇಲ್ಭಾಗದಲ್ಲಿ ಹಾದು ಹೋಗುತ್ತಿದ್ದ ರಸ್ತೆಯ ಒಂದು ಪಕ್ಕದಲ್ಲಿ ನಾಗರ ಕಟ್ಟೆಯಿದ್ದರೆ ಇನ್ನೊಂದು ಪಕ್ಕದಲ್ಲಿ ಒಂದು ಕಲ್ಲಿನ ಪೀಠದ ಮೇಲೆ ಬ್ರಹ್ಮನ ಮೂರ್ತಿಯನ್ನು ಸ್ಥಾಪಿಸಲಾಗಿತ್ತು. ಕೆರೆಯ ಇನ್ನೊಂದು ದಂಡೆಯ ಬದಿಯಲ್ಲಿ ಚೌಡೇಶ್ವರಿಯ ವಾಸಸ್ಥಾನವಿತ್ತು. ಬ್ರಹ್ಮನ ಮೂರ್ತಿಯಿದ್ದ ಜಾಗಕ್ಕೆ ಬ್ರಹ್ಮನಬನ ಎಂದೇ ಕರೆಯಲಾಗುತ್ತಿತ್ತು. ನಮಗೆ ತಿಳಿದಂತೆ ನಮ್ಮ ದೇಶದಲ್ಲಿ ರಾಜಸ್ಥಾನದ ಪುಷ್ಕರವೆಂಬ ಊರನ್ನು ಬಿಟ್ಟರೆ ಬೇರೆಲ್ಲ್ಲೂ ಬ್ರಹ್ಮನ ದೇವಸ್ಥಾನಗಳಿಲ್ಲ. ಅಲ್ಲೂ ಕೂಡ ಬ್ರಹ್ಮನಿಗೆ ಪೂಜೆ ಮಾಡುವುದಿಲ್ಲವಂತೆ. ಅದಕ್ಕೆ ಬ್ರಹ್ಮನ ಪತ್ನಿ ಸರಸ್ವತಿಯ ಶಾಪವೇ ಕಾರಣವಂತೆ. ಆದರೆ ಕಥೆ ಇಲ್ಲಿ ಅಪ್ರಸ್ತುತ. ಆದರೆ ನಮ್ಮೂರಿನಲ್ಲಿ ಬ್ರಹ್ಮನ ಮೂರ್ತಿ ಇದ್ದುದು ಮಾತ್ರವಲ್ಲ ಅದಕ್ಕೆ ಪೂಜೆ ಇಲ್ಲದಿದ್ದರೂ ಆಗಾಗ ಫಲಾರ್ಪಣೆ (ಹಣ್ಣು ನೈವೇದ್ಯ) ಮಾಡಲಾಗುತ್ತಿತ್ತು.
ನಮ್ಮೂರಿನ ವಿಶೇಷ ನೀರಾವರಿ ಯೋಜನೆಗಳು
ನಮ್ಮ ಊರಿನ ಒಂದೊಂದು ಮನೆಗೂ ವಿಶೇಷವಾದ ಕುಡಿಯುವ ನೀರಿನ ವ್ಯವಸ್ಥೆ  ಇತ್ತು. ಬೆಳವಿನಕೊಡಿಗೆ ಮನೆಗೆ ಒಂದು ಕೆರೆಯಿಂದ ನೀರು ಹರಿದು ಬರುತ್ತಿದ್ದರೆ ಸಂಪಿಗೆಕೊಳಲಿಗೆ ದೇವರಮನೆ ಕೆರೆಯಿಂದ ನೀರು ಬರುತ್ತಿತ್ತು. ನಡುವಿನಮನೆ ಸಮೀಪದಲ್ಲಿದ್ದ  ಒಂದು ಬಾವಿಯಿಂದ ನೀರು ಉಕ್ಕಿ ಅಡಿಕೆ ಮರದ ದೋಣಿಯ ಮೂಲಕ ಮನೆಯ ಬಚ್ಚಲಿಗೆ ಬಂದು ಬೀಳ್ಳುತ್ತಿದ್ದಲ್ಲದೇ ಹೆಚ್ಚಾದ ನೀರು ಮನೆಯ ಕೆಳಗಿದ್ದ ಕೆರೆಗೆ ಹರಿದು ಹೋಗುತ್ತಿತ್ತು. ಇನ್ನು ಅಡೇಖಂಡಿ ಮತ್ತು ಮೊದಲಮನೆಗಳಿಗೆ ಒರತೆಯ ನೀರು ಧಾರಾಳವಾಗಿ ಹರಿದು ಬರುತ್ತಿತ್ತು.

ನಾವು ನೋಡಿದಂತೆ ನಮ್ಮೂರೆಲ್ಲಾ ಅಡಿಕೆ ಬಾಳೆ ತೋಟಗಳಿಂದ ತುಂಬಿದ್ದರೂ ಒಂದು ಕಾಲದಲ್ಲಿ ಬೇರೆಬೇರೆ ಬೆಳೆಗಳನ್ನೂ ಬೆಳೆಯುತ್ತಿದ್ದಿರಬೇಕು. ಏಕೆಂದರೆ ನಮ್ಮ ಮನೆಯ ಮೇಲ್ಭಾಗದಲ್ಲಿದ್ದ ತೋಟಕ್ಕೆ ಕಬ್ಬಿನಹಕ್ಲು ಎಂದು ಹೆಸರಿದ್ದರೆ ನಡುವಿನಮನೆಯ ಮುಂದಿದ್ದ ತೋಟಕ್ಕೆ ಶುಂಠಿಹಕ್ಲು ಎಂಬ ಹೆಸರಿತ್ತು. ತೋಟದ ಬೇರೆಬೇರೆ ಭಾಗಗಳಿಗೆ ಬೇರೆಬೇರೆ ಹೆಸರುಗಳು ರೂಡಿಯಲ್ಲಿದ್ದುವು. ಉದಾಹರಣೆಗೆ ಗುಡ್ಡೇತೋಟ, ಬಾವಿಕಂಡು, ಶೇಷನ ತೋಟ, ಪುಟ್ಟಕಂಡು, ಮುರುಗನಮನೆ ಕಂಡು,ಇತ್ಯಾದಿ.

ನಮ್ಮ ತೋಟದ ಕಣಿವೆ ಒಂದೇ ಮಟ್ಟದಲ್ಲಿರಲಿಲ್ಲ. ಹಾಗಾಗಿ ಅಡಿಕೆ ಹಾಗೂ ಬಾಳೆಗಿಡಗಳನ್ನು ವಿವಿದ ಮಟ್ಟದಲ್ಲಿ ನೆಟ್ಟು ಬೆಳೆಸಲಾಗಿತ್ತು. ಈ ರೀತಿ ಬೆಳೆಸಿದ ತೋಟದ ವಿವಿಧ ಭಾಗಗಳಿಗೆ ನೀರು ತಲುಪುವಂತೆ ಮಾಡುವುದು ದೊಡ್ಡ ಸಮಸ್ಯೆಯಾಗಿತ್ತು. ಆದರೆ ತೋಟದ ಮಧ್ಯದಲ್ಲಿ ಅಲ್ಲಲ್ಲಿದ್ದ ಕೆರೆಗಳಿಂದ ತೋಟದ ಎಲ್ಲ ಭಾಗಗಳಿಗೂ ನೀರು ತಲುಪುವ ವ್ಯವಸ್ಥೆಯಿತ್ತು. ಪ್ರತಿಯೊಂದು ಕೆರೆಯ ನೀರು ಕೂಡ ತೋಟದ ಮೂಲೆಮೂಲೆಗೂ ತಲುಪುವಂತೆ ಕಾಲುವೆಗಳನ್ನು ರಚಿಸಲಾಗಿತ್ತು. ಕೆರೆಗಳಿಗೆ ವಿಶಿಷ್ಟವಾದ ಹೆಸರುಗಳನ್ನು ಇಡಲಾಗಿತ್ತು. ಆದರೆ ಮೂಲ ಹೆಸರುಗಳು ಬಳಕೆಯಲ್ಲಿ ಬದಲಾಗುತ್ತ ಹೋಗಿ ಕೆಲವಕ್ಕೆ ಯಾವ ಅರ್ಥವೂ ಇಲ್ಲದಂತಾಗಿತ್ತು. ರೀತಿಯ ಕೆಲವು ಹೆಸರುಗಳೆಂದರೆ ಅತ್ರಣೆ ಕೆರೆ, ಕೊಣದಣೆ ಕೆರೆ, ನೂರ್ಲ್ ಪಾರ್ಲ್ ಕೆರೆ ಮತ್ತು ಕಪ್ರಣೆ ಕೆರೆ. ಬೇಸಿಗೆ ಕಾಲ  ಬಂದಾಗ ಎಲ್ಲಾ ಕೆರೆಗಳಿಗೂ ಕಟ್ಟೆ  ಕಟ್ಟಿ ನೀರನ್ನು ಸರದಿಯಮೇಲೆ ಬೇರೆಬೇರೆ ಮನೆಗಳಿಗೆ ಸೇರಿದ ತೋಟಗಳಿಗೆ ಬಿಡಲಾಗುತ್ತಿತ್ತು.

ಪ್ರತಿಮನೆಯ ತೋಟಕ್ಕೂ ಅದರ ವಿಸ್ತೀರ್ಣದ ಆಧಾರದ ಮೇಲೆ ಎಷ್ಟು ದಿನ ನೀರು ಬಿಡಬಹುದೆಂದು ಯಾವುದೋ ಕಾಲದಲ್ಲಿ ನಿಗದಿ ಮಾಡಲಾಗಿತ್ತು. ಮಳೆಗಾಲ ಬರುವ ಮುನ್ನ ಎಲ್ಲಾ ಕೆರೆಗಳ ಕಟ್ಟೆ ಒಡೆದು ನೀರನ್ನು ಹಳ್ಳಕ್ಕೆ ಬಿಡಲಾಗುತ್ತಿತ್ತು. ಹಳ್ಳ ಮುಂದೆ ಹರಿದು ಮಕ್ಕಿ ಗದ್ದೆಗೆ ಮಳೆಗಾಲದ ಬತ್ತದ ಬೆಳೆಗೆ ಉಪಯೋಗವಾಗುತ್ತಿತ್ತು.

 ನಾನು ಮೊದಲೇ ಹೇಳಿದಂತೆ ಯಾವನೋ ದೊಡ್ಡ ಇಂಜಿನಿಯರ್ ವಿಶಿಷ್ಟ ರೀತಿಯ ನೀರಾವರಿ ಯೋಜನೆಯನ್ನು ನಮ್ಮೂರಿಗೆ ಅಳವಡಿಸಿರಬೇಕು. ಏಕೆಂದರೆ  ಇಷ್ಟಲ್ಲದೇ ಮೊದಲಮನೆಯ ಮುಂದೆ ಹರಿಯುತ್ತಿದ್ದ ಒಂದು ಹಳ್ಳದಿಂದ  ಒಂದು ಕಾಲದಲ್ಲಿ ಪುರದಮನೆಯ ಮೇಲ್ಭಾಗದಲ್ಲಿದ್ದ ಬಸವನಮಕ್ಕಿ ಮತ್ತು ಬೂರನಮಕ್ಕಿ ಎಂಬ ಗದ್ದೆಗಳಿಗೆ ನೀರು ಹೋಗುವಂತೆ ಕಾಲುವೆ ಮಾಡಲಾಗಿತ್ತುಪ್ರಕೃತಿಯ ವಿಕೋಪಕ್ಕೆ ಸಿಲುಕಿ ಕಾಲುವೆಯ ಅರ್ಧಭಾಗ ಕುಸಿದುಹೋಗಿ ನಾಶವಾಗಿದ್ದುದು ನಮ್ಮ ಕಣ್ಣಿಗೆ ಬೀಳುತ್ತಿತ್ತು. ನೀರಿನ ಆಧಾರ ತಪ್ಪಿದ್ದರಿಂದ ಎರಡು ಗದ್ದೆಗಳೂ ಶಾಶ್ವತವಾಗಿ ಹಾಳು  ಬಿದ್ದಿದ್ದವು.

ಇನ್ನೊಂದು ಅಪೂರ್ಣವಾದ ಮಹಾ ನೀರಾವರಿ ಯೋಜನೆ ನಮ್ಮೂರಿನ ಕಿತ್ಳೆಕಟ್ಟೆ ಗುಡ್ಡದ ಮೇಲೆ ಕಣ್ಣಿಗೆ ಬೀಳುತ್ತಿತ್ತು. ಅದೊಂದು ರೀತಿಯ ಭಗೀರಥ ಯೋಜನೆಯೇ ಅನ್ನಬಹುದು. ಯೋಜನೆಯಂತೆ ಗುಡ್ಡದ ಒಂದು ತಲೆಭಾಗದಿಂದ ಇಳಿಜಾರಿನಲ್ಲಿ ಬೇರೆಕಡೆ ಹರಿದು  ಹೋಗುತ್ತಿದ್ದ ಹಳ್ಳವನ್ನು ನಮ್ಮೂರಿನ ಕಡೆ ತಿರುಗಿಸಿ ಹರಿಸುವ ಪ್ರಯತ್ನವಿತ್ತು. ನೀರು ಹರಿದು ಹೋಗುತ್ತಿದ್ದ ಗುಡ್ಡದ ಇಳಿಜಾರಿನ ಭಾಗಕ್ಕೆ ಕೊಂಗನ  ಸರಳು ಎಂದು ಕರೆಯಲಾಗುತ್ತಿತ್ತು. ಆದರೆ ಯಾವುದೋ  ತಾಂತ್ರಿಕ ಕಾರಣದಿಂದ ಯೋಜನೆ ಅರ್ಧಕ್ಕೇ ನಿಂತು ಹೋಗಿ ಅಪೂರ್ಣವಾದ ಕಾಲುವೆಗಳು ತಮ್ಮ ಉದ್ದೇಶ ಸಾಧಿಸಲಾಗದೆ ಕೊರಗುತ್ತಿದ್ದುದು ನಮ್ಮ ಮನಮಿಡಿಯುವಂತಿತ್ತು.
ನಮ್ಮೂರ ಹುಲಿಯ ಮೈಸೂರು ಪಯಣ
ನಮ್ಮೂರಿಗೆ ಮಲೆನಾಡಿನ ಯಾವ  ಹಳ್ಳಿಗೂ ಸಿಗದಂತ ಸೌಭಾಗ್ಯವೊಂದು ಸಿಕ್ಕಿ ಅದು ನಮ್ಮೂರ ಇತಿಹಾಸಕ್ಕೆ ಸೇರ್ಪಡೆಯಾಗಿತ್ತು. ಪ್ರಸಂಗ ನಾವು ನಮ್ಮ ತಂದೆ-ತಾಯಿಯ ಬಾಯಿಂದ ಬಾಲ್ಯದಲ್ಲಿ ಕೇಳಿದ್ದುನಾನು ಆಗಲೇ  ಬರೆದಂತೆ ನಮ್ಮೂರಿನ ಬೆಟ್ಟದ ಮೇಲಿದ್ದ ಓರಣಕಲ್ ಎಂಬ ಗುಹೆಗೆ ಆಗಾಗ ಹುಲಿಗಳು ವಲಸೆ ಬಂದು ಕ್ಯಾಂಪ್ ಮಾಡುತ್ತಿದ್ದವು. ಒಮ್ಮೆ ಹಾಗೆ ಬಂದ ಹುಲಿಯೊಂದು ದೀರ್ಘಕಾಲ ತನ್ನ ಕ್ಯಾಂಪನ್ನು ಮುಂದುವರಿಸಿ ನಮ್ಮೂರ ಜಾನುವಾರುಗಳನ್ನು ಒಂದೊಂದಾಗಿ ಕಬಳಿಸ ತೊಡಗಿತ್ತಂತೆ. ಪುರದಮನೆ ಶಿಂಗಪ್ಪಯ್ಯನವರು ಕಾಲದಲ್ಲಿ ನಮ್ಮೂರಿನ ಶ್ರೀಮಂತ ಮತ್ತು ಧೀಮಂತ ವ್ಯಕ್ತಿಯಾಗಿದ್ದರು. ಊರ ಜನರೆಲ್ಲಾ ಒಟ್ಟಾಗಿ ಹುಲಿಯ ಕಾಟದಿಂದ ಹೇಗಾದರೂ ಬಿಡುಗಡೆ ಮಾಡಬೇಕೆಂದು ಅವರನ್ನು ಕೇಳಿಕೊಂಡರಂತೆ.

ಶಿಂಗಪ್ಪಯ್ಯನವರು ಕೂಡಲೇ ಕಾರ್ಯೋನ್ಮುಖರಾಗಿ ತುಂಬಾ ಪ್ರವೀಣರಾಗಿದ್ದ ಬಡಗಿಗಳನ್ನು ಕರೆಸಿ ಒಂದು  ದೊಡ್ಡ ಹುಲಿಯ ಬೋನನ್ನು ತಯಾರು ಮಾಡಿಸಿದರಂತೆ ಬೋನಿನ ಒಂದುಭಾಗದಲ್ಲಿ ಒಂದು ಸಣ್ಣ ಕರುವನ್ನು ಅದರ ಜೀವಕ್ಕೆ ಅಪಾಯವಾಗದಂತೆ ಇಟ್ಟು ಬೋನನ್ನು ಗಾಡಿಯಲ್ಲಿ ತೆಗೆದುಕೊಂಡು ಹೋಗಿ ಗುಹೆಯ ಸಮೀಪದಲ್ಲಿ ಇರಿಸಿದರಂತೆ ಪ್ರಯತ್ನ ಫಲಕಾರಿಯಾಗಿ ರಾತ್ರಿಯೇ ಹುಲಿ ಕರುವನ್ನು ತಿನ್ನಲು ಬೋನಿನೊಳಗೆ ಪ್ರವೇಶಿಸಿ ಅದರಲ್ಲಿ ಸಿಕ್ಕಿಹಾಕಿಕೊಂಡಿತಂತೆ. ಹೀಗೆ ಸಿಕ್ಕಿಕೊಂಡ ಹುಲಿರಾಯನ ಘರ್ಜನೆ ದೂರ ದೂರದ ಊರುಗಳಿಗೂ ಕೇಳತೊಡಗಿತಂತೆ.

ಹುಲಿಯ ಬಂಧನದ ಸಮಾಚಾರ ಇಡೀ ಕೊಪ್ಪ ಮತ್ತು ಶೃಂಗೇರಿ ತಾಲೂಕುಗಳಲ್ಲಿ ಹರಡಿ ಅದನ್ನು ವೀಕ್ಷಿಸಲು ನಮ್ಮೂರಿಗೆ ಜನಗಳ ಸಂತೆಯೇ ಬರತೊಡಗಿತಂತೆ. ಊರಿನಲ್ಲಿ ಒಂದು ದೊಡ್ಡ ಹಬ್ಬದ ವಾತಾವರಣ ಇತ್ತಂತೆ. ಆದರೆ ಊರಿನವರಿಗೆ ಎದುರಾದ  ಸಮಸ್ಯೆಯೆಂದರೆ ಹುಲಿರಾಯನನ್ನು ಮುಂದೇನು ಮಾಡಬೇಕೆನ್ನುವುದು. ಆದರೆ ಶಿಂಗಪ್ಪಯ್ಯನವರು ತುಂಬಾ ದೂರದೃಷ್ಟಿಯುಳ್ಳ ವ್ಯಕ್ತಿ. ಆಗಿನ ಕಾಲದಲ್ಲಿ ಯಾವುದೇ ಸಂಪರ್ಕ ಸಾಧನಗಳು (ಟೆಲಿಫೋನ್ ಇತ್ಯಾದಿ) ಇರಲಿಲ್ಲ. ಆದ್ದರಿಂದ ಅವರು ಒಬ್ಬ ಗಣ್ಯ ವ್ಯಕ್ತಿಯನ್ನು ಮೈಸೂರಿಗೆ ಶ್ರೀಮನ್ ಮಹಾರಾಜ ನಾಲ್ಮಡಿ ಕೃಷ್ಣರಾಜರನ್ನು ಭೇಟಿಮಾಡಲು ಕಳಿಸಿದರಂತೆ. ಅವರ ಪ್ರಭಾವ ಎಷ್ಟಿತ್ತೆಂದರೆ ಮಹಾರಾಜರು ಮೈಸೂರಿನ ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳಿಗೆ ಹುಲಿಯನ್ನು ಸಾಗಿಸಲು ಸೂಕ್ತವಾದ ವಾಹನವನ್ನು ನಮ್ಮೂರಿಗೆ ಕೂಡಲೇ ಕಳಿಸುವಂತೆ ಅಪ್ಪಣೆ ಮಾಡಿದರಂತೆ. ಶೀಘ್ರದಲ್ಲೇ ನಮ್ಮೂರು ತಲುಪಿದ ವಾಹನದಲ್ಲಿ ನಮ್ಮೂರ ಹುಲಿರಾಯ   ಸೂಕ್ತ ಬೀಳ್ಕೊಡಿಗೆ ಸಮಾರಂಭದ ನಂತರ ಆಗಿನ ರಾಜಧಾನಿಯಾದ ಮೈಸೂರಿಗೆ ಪ್ರಯಾಣ ಮಾಡಿದನಂತೆ.

ನಮ್ಮಮ್ಮನ  ಪ್ರಕಾರ ಆಮೇಲೆ ಎಷ್ಟೋ ವರ್ಷ ಪ್ರತೀ ತಿಂಗಳೂ ಮೈಸೂರು ಪ್ರಾಣಿ ಸಂಗ್ರಹಾಲಯದಿಂದ ಶಿಂಗಪ್ಪಯ್ಯನವರ  ಹೆಸರಿಗೆ ಒಂದು ಪತ್ರ  ಬರುತ್ತಿತ್ತಂತೆ. ಅದರಲ್ಲಿ ನಿಮ್ಮೂರಿನ ಹುಲಿ ನಮ್ಮಲ್ಲಿ ಕ್ಷೇಮವಾಗಿದೆ ಎಂದು ಬರೆದಿರುತ್ತಿತ್ತಂತೆ. ನಮ್ಮ ತಂದೆಯವರು ಶಿಂಗಪ್ಪಯ್ಯನವರ ಆಪ್ತರಾಗಿದ್ದರಿಂದ ಹುಲಿರಾಯನ ಪ್ರಸಂಗದಲ್ಲಿ ಪ್ರಮುಖ ಪಾತ್ರವಹಿಸಿದ್ದರಂತೆ.
----ಮುಂದುವರಿಯುವುದು ---